ಗುರುವಾರ, ಮಾರ್ಚ್ 17, 2011

ಸಾಗರದ ಸುದ್ದಿ ದಿನಂಪ್ರತಿ ಓದಿ, ಸುವರ್ಣಪ್ರಭ ವೆಬ್ ರೂಪದಲ್ಲಿ.....



ಬದುಕಿನ ಸಾಧನೆಗೆಂದು ಹಾಗೂ ತುತ್ತು ಚೀಲದ ಸಂಪಾದನೆಗೆಂದು ಸಾಗರದ ಹಲವು ಸಾವಿರ ಮಂದಿ ಜಿಲ್ಲೆಯ ಹೊರಗೆ, ಬೆಂಗಳೂರಿನಲ್ಲಿ, ಅಷ್ಟೇಕೆ ವಿದೇಶಗಳಲ್ಲಿ ನೆಲಸಿದ್ದಾರೆ. ಇವರಿಗೆ ಸಾಗರ ತಾಲೂಕಿನ ದಿನದಿನದ ಸುದ್ದಿಗಳು ಲಭ್ಯವಾಗುವುದೇ ಇಲ್ಲ. ಉದಯವಾಣಿ ಪತ್ರಿಕೆ ತನ್ನ ಇ ಪತ್ರಿಕೆಯಲ್ಲಿ ಲೋಕಲ್ ಎಡಿಷನ್ ಪುಟಗಳನ್ನೂ ಅಪ್‌ಲೋಡ್ ಮಾಡುವುದರಿಂದ ಸ್ವಲ್ಪ ಮಾಹಿತಿ ಲಭ್ಯವಾಗುವ ಸಮಾಧಾನ. ಉಳಿದೆಲ್ಲ ಪತ್ರಿಕೆಗಳು ಸ್ಥಳೀಯ ಆವೃತ್ತಿಗಳನ್ನು ಅಂತರ್ಜಾಲಕ್ಕೆ ಏರಿಸದಿರುವುದರಿಂದ ಸಾಗರದ ಸರಿಸುಮಾರು ಪ್ರಮುಖ ಸುದ್ದಿಯೂ ಸಾಗರಿಕರಿಗೆ ತಿಳಿಯುವುದೇ ಇಲ್ಲ.
ಅಂತವರಿಗೆ ಒಂದು ಪರಿಹಾರ ಲಭಿಸಿದೆ. ಸಾಗರದ ಹಿತಕರ ಜೈನ್ ಸಂಪಾದಕತ್ವದ ಸುವರ್ಣಪ್ರಭ ದೈನಿಕ ಇದೀಗ ತನ್ನ ಪಿಡಿಎಫ್ ರೂಪವನ್ನು ಬ್ಲಾಗ್‌ಸ್ಪಾಟ್ ವೆಬ್‌ನಲ್ಲಿ ಪ್ರತಿ ದಿನ ಪ್ರಕಾಶಿಸುತ್ತಿರುವುದರಿಂದ ಸಾಗರದ ಅಷ್ಟೂ ಸುದ್ದಿಗಳನ್ನು ಓದಿ ಸಾಗರದ ಹೊರಗಿನ ಸಾಗರಿಕರು ಅಪ್‌ಡೇಟ್ ಆಗಬಹುದು. ಒನ್ ಮ್ಯಾನ್ ಆರ್ಮಿಯಾಗಿರುವ ಹಿತಕರ್‌ರ ಪ್ರಯತ್ನಕ್ಕೆ ನೀವು ಕೂಡ ಬೆಂಬಲ ನೀಡಿ.
ಸ್ವಾರಸ್ಯವೆಂದರೆ, ಸಾಗರದ ಜನರು ಓದುವ ಮುನ್ನವೇ ನೆಟ್ಟಿಗರು ಸುದ್ದಿ ಓದಿಬಿಡುವ ಸಾಧ್ಯತೆಯಿದೆ! ಅಂತರ್ಜಾಲವೆಂದರೆ ವೇಗ ತಾನೆ? ಹಿತಕರ್ ಜೈನ್‌ಗೆ ಅಭಿನಂದನೆಗಳು......

 
200812023996